Select Your Language

Notifications

webdunia
webdunia
webdunia
webdunia

ಸಾವಿಗೂ ಮುನ್ನ ನಟ ದರ್ಶನ್ ಸಿನಿಮಾದಲ್ಲಿ ಅವಕಾಶ ಪಡೆದಿದ್ದ ಪವಿತ್ರಾ ಜಯರಾಂ

Pavithra Jayaram

Krishnaveni K

ಬೆಂಗಳೂರು , ಮಂಗಳವಾರ, 14 ಮೇ 2024 (10:52 IST)
ಬೆಂಗಳೂರು: ಮೊನ್ನೆಯಷ್ಟೇ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ಕನ್ನಡ, ತೆಲುಗು ಕಿರುತೆರೆ ನಟಿ ಪವಿತ್ರಾ ಜಯರಾಂ ಬಗ್ಗೆ ಅವರ ಸ್ನೇಹಿತ ಚಂದ್ರು ಹೊಸ ಹೊಸ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

ಪವಿತ್ರಾ ಜಯರಾಂ ಕಿರುತೆರೆಯಲ್ಲಿ ಮಿಂಚಿದ್ದರೂ ಇದುವರೆಗೆ ಅವರಿಗೆ ಹಿರಿತೆರೆಯಲ್ಲಿ ಅಂತಹ ಅವಕಾಶ ಸಿಕ್ಕಿರಲಿಲ್ಲ. ಆದರೆ ಇದೀಗ ಹೈದರಾಬಾದ್ ಗೆ ತೆರಳುವ ಹಾದಿಯಲ್ಲಿ ಅವರು ಬೆಂಗಳೂರಿಗೆ ಬಂದು ಸಿನಿಮಾಮವೊಂದಕ್ಕೆ ಸಹಿ ಹಾಕುವ ಯೋಜನೆ ಹೊಂದಿದ್ದರಂತೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಸಿನಿಮಾದಲ್ಲಿ ನಟಿಸುವ ಅವಕಾಶ ಪವಿತ್ರಾ ಪಡೆದಿದ್ದರು. ಇದಕ್ಕೆ ಸಹಿ ಹಾಕಲು ಅವರು ಬೆಂಗಳೂರಿಗೆ ಬಂದಿದ್ದರು. ಆದರೆ ಅಷ್ಟರಲ್ಲಿ ಜೆಮಿನಿ ಟಿವಿಯಿಂದ ಮತ್ತೊಂದು ಆಫರ್ ಬಂತು ಎಂದು ತೆರಳಿದ್ದರು. ಆದರೆ ಇಷ್ಟರಲ್ಲಿ ಇಂತಹದ್ದೊಂದು ದುರ್ಘಟನೆ ನಡೆದಿದೆ ಎಂದು ಅವರು ಬೇಸರದಿಂದಲೇ ಖಾಸಗಿ ವಾಹಿನಿಗೆ  ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಪವಿತ್ರಾ ಜಯರಾಂಗೆ ಅಪಘಾತವಾದಾಗ ಮಾರಣಾಂತಿಕ ಗಾಯವಾಗಿರಲಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬಂದಿರಲಿಲ್ಲ. ಅಪಘಾತವಾದ ಭಯಕ್ಕೇ ಅವರು ತೀರಿಕೊಂಡರು ಎಂದು ಚಂದ್ರು ಹೇಳಿಕೆ ನೀಡಿದ್ದರು. ಈ ಅಪಘಾತದಲ್ಲಿ ಚಂದ್ರು ಅವರಿಗೂ ಗಾಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಫ್ ಸ್ಕ್ರೀನ್ ನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ರಾಮಚಾರಿ-ಚಾರು, ಮದುವೆ ಯಾವಾಗ ಎಂದ ಫ್ಯಾನ್ಸ್