Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಹತ್ಯೆ ವಿಚಾರ ತಿಳಿಯುತ್ತಿದ್ದಂತೇ ದರ್ಶನ್ ಪ್ರತಿಕ್ರಿಯೆ ಹೇಗಿತ್ತು

Darshan

Krishnaveni K

ಬೆಂಗಳೂರು , ಶನಿವಾರ, 6 ಜುಲೈ 2024 (11:52 IST)
ಬೆಂಗಳೂರು: ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ಬಳಿಕ ಶೆಡ್ ನಿಂದ ತೆರಳಿದ್ದ ದರ್ಶನ್ ಗೆ ಆತ ಸಾವನ್ನಪ್ಪಿದ ಸುದ್ದಿ ಕೇಳಿದ ಮೇಲೆ ಪ್ರತಿಕ್ರಿಯೆ ಹೇಗಿತ್ತು ಎಂದು ಈಗ ಬಯಲಾಗಿದೆ.

ರೇಣುಕಾಸ್ವಾಮಿಯನ್ನು ವಿಚಾರಿಸಿಕೊಂಡ ದರ್ಶನ್ ನೇರವಾಗಿ ತಮ್ಮ ಆರ್ ಆರ್ ನಗರ ಮನೆಗೆ ಹೋಗಿದ್ದರು. ಆ ವೇಳೆ ಪಟ್ಟಣಗೆರೆ ಶೆಡ್ ನಿಂದ ಅವರಿಗೆ ಕರೆ ಬಂದಿದೆ. ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ. ಬೇಗ ಬನ್ನಿ ಎಂದು ಅವರನ್ನು ಸಹಚರರು ಕರೆದಿದ್ದಾರೆ. ಸ್ಟೋನಿ ಬ್ರೂಕ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪಿ ವಿನಯ್ ಆಂಡ್ ಟೀಂ ನೇರವಾಗಿ ದರ್ಶನ್ ಮನೆಗೆ ಬರುತ್ತಾರೆ. ಇವರೆಲ್ಲರಿಂದ ಮಾಹಿತಿ ತಿಳಿದು ದರ್ಶನ್ ತಲೆಮೇಲೆ ಕೈ ಹೊತ್ತು ಕೂರುತ್ತಾರಂತೆ.

ಘಟನೆ ಬಗ್ಗೆ ತಿಳಿದ ಬಳಿಕ ದರ್ಶನ್ ಅಲ್ಲಿದ್ದ ಸಹಚರರ ಮೇಲೆ ಕೂಗಾಡುತ್ತಾರೆ. ಬಾಸ್ ರೊಚ್ಚಿಗೆದ್ದಿದ್ದು ನೋಡಿ ಇತರರು ನಾವೆಲ್ಲಾ ನೋಡ್ಕೋತಿವಿ ಬಾಸ್ ಎಂದು ಅಭಯ ನೀಡುತ್ತಾರೆ. ಅದರಂತೆ ರೇಣುಕಾಸ್ವಾಮಿಯ ಶವ ಎಸೆಯಲು ಎಲ್ಲರೂ ಸೇರಿಕೊಂಡು ಪ್ಲ್ಯಾನ್ ಮಾಡುತ್ತಾರೆ.

ಮೃತದೇಹ ವಿಲೇವಾರಿ ಮಾಡಿ ಹಣಕಾಸಿನ ಡೀಲ್ ಎಲ್ಲಾ ಮುಗಿಸಿ ಬೆಳಿಗ್ಗೆ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ನಡೆದಿದ್ದ ಹೋಮದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.  ಬಳಿಕ ಅಲ್ಲಿಂದ ಮೈಸೂರಿಗೆ ಡೆವಿಲ್ ಶೂಟಿಂಗ್ ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಹೊಸ ಲುಕ್‌ನಲ್ಲಿ ಬರಲಿದ್ದಾನೆ 'ಹುಚ್ಚಾ'