Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ ಸ್ಪರ್ಧಿ ತನಿಷಾ ವಿರುದ್ಧ ದೂರು ದಾಖಲು

ಬಿಗ್ ಬಾಸ್ ಕನ್ನಡ ಸ್ಪರ್ಧಿ ತನಿಷಾ ವಿರುದ್ಧ ದೂರು ದಾಖಲು
ಬೆಂಗಳೂರು , ಮಂಗಳವಾರ, 14 ನವೆಂಬರ್ 2023 (17:00 IST)
Photo Courtesy: Twitter
ಬೆಂಗಳೂರು: ಯಾಕೋ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ವರ್ತೂರು ಸಂತೋಷ್ ಹುಲಿ ಉಗುರು ಪ್ರಕರಣದಲ್ಲಿ ಬಂಧಿತರಾಗಿ ಈಗ ಮತ್ತೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇದೀಗ ಮತ್ತೊಬ್ಬ ಸ್ಪರ್ಧಿಸ ತನಿಷಾ ವಿರುದ್ಧ ದೂರು ದಾಖಲಾಗಿದೆ.

ತನಿಷಾ ಕುಪ್ಪಂಡ ಮಾತಿನ ಭರದಲ್ಲಿ ಭೋವಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಅವರ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವರ್ತೂರು ಸಂತೋಷ್ ಅವರ ಬಗ್ಗೆ ತನಿಷಾ ನೀನು ವಡ್ಡ ಅಲ್ಲ, ಆದರೆ ವಡ್ಡನ ರೀತಿ ಆಕ್ಟ್ ಮಾಡುತ್ತಿದ್ದೀಯಾ ಎಂದಿದ್ದರು. ಅವರ ಈ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ವಡ್ಡ ಪದ ಭೋವಿ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಆಕೆಯ ವಿರುದ್ಧ ಭೋವಿ ಸಮುದಾಯ ಪ್ರತಿಭಟನೆ ಮಾಡಲಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಧನ್ವೀರ್ ಕುತ್ತಿಗೆಯಲ್ಲಿರುವುದು ಹುಲಿ ಉಗುರಾ? ಸ್ಪಷ್ಟನೆ ನೀಡಿದ ನಟ