Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಬೆದರಿಕೆ ಪತ್ರದ ಸುತ್ತ

ಕಿಚ್ಚ ಸುದೀಪ್ ಬೆದರಿಕೆ ಪತ್ರದ ಸುತ್ತ
bangalore , ಶುಕ್ರವಾರ, 21 ಏಪ್ರಿಲ್ 2023 (17:26 IST)
ಸ್ಯಾಂಡಲ್​​​​ವುಡ್ ನಟ ಕಿಚ್ಚ ಸುದೀಪ್​ಗೆ ಬೆದರಿಕೆ ಪತ್ರ ಬಂದ ಕೇಸ್​​​ಗೆ ಸಂಬಂಧಿಸಿದಂತೆ ಕೆಲಸ ಬಿಟ್ಟಿದ್ದ ಸುದೀಪ್ ಕಾರು ಚಾಲಕ‌ನನ್ನ ಸಿಸಿಬಿ ತೀವ್ರ ವಿಚಾರಣೆ ನಡೆಸಿದೆ. ಈಗಾಗಲೇ 2 ಬಾರಿ ಸಿಸಿಬಿ ನೊಟೀಸ್ ನೀಡಿ ಕಾರು ಚಾಲಕನನ್ನು ವಿಚಾರಣೆ ನಡೆಸಿದ್ರೂ ಸಹ ಯಾವುದೇ ಮಾಹಿತಿ ದೊರೆತಿಲ್ಲ. ದೂರು ಕೊಟ್ಟ ನಿರ್ಮಾಪಕ ಜಾಕ್ ಮಂಜು ಸಿಸಿಬಿಗೆ ಯಾವುದೇ ಸಹಕಾರ ನೀಡುತ್ತಿಲ್ಲ. ಈ ಹಿಂದೆ ಮಾಧ್ಯಮದವರ ಮುಂದೆ ಆರೋಪಿಗಳು ಯಾರು ಅಂತ ಗೊತ್ತು ಎಂದು ಜಾಕ್​ ಮಂಜು ಹೇಳಿದ್ರು.. ನಂತರ ಜಾಕ್​ ಮಂಜುಗೆ ಸಿಸಿಬಿಯವರು ನೋಟಿಸ್​ ನೀಡಿ ವಿಚಾರಣೆ ನಡೆಸಿದರು. ಆದರೆ ಮಂಜು ಈವರೆಗೂ ಯಾವುದೇ ಹೆಸರುಗಳನ್ನು ಸಿಸಿಬಿಗೆ ಹೇಳಿಲ್ಲ.. ಸಿಸಿಬಿ ಕಾರನ್ನು ಪತ್ತೆ ಮಾಡಿ ಕಾರು ಚಾಲಕನನ್ನು ವಿಚಾರಣೆ ನಡೆಸಿದಾಗ ನಕಲಿ ನಂಬರ್​ ಪ್ಲೇಟ್​ ಬಳಸಿರುವುದು ಬೆಳಕಿಗೆ ಬಂದಿದೆ. ಕಾರು ಸಿಕ್ಕಿದೆ, ಆರೋಪಿಗಳ ಫೋಟೋ ಸಿಕ್ಕಿದೆ. ಆದರೆ ಈವರೆಗೂ ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗದ ಕಾರಣ ಆರೋಪಿಗಳ ಪತ್ತೆಗೆ ಸಿಸಿಬಿಯವರು ತಲೆಕೆಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಗೆ ಬೆದರಿಕೆ ಪ್ರಕರಣದಲ್ಲಿ ಮಾಜಿ ಕಾರು ಚಾಲಕನ ವಿಚಾರಣೆ